ಮಲೆನಾಡ ಸುಂದರ ಸ್ವಚ್ಛಂದ ಪರಿಸರದಲ್ಲಿ ಹುಟ್ಟಿ,ಬೆಳೆದು, ಹೊಟ್ಟೆಪಾಡಿಗಾಗಿ ನಗರ ಸೇರಿ ಇಲ್ಲಿಯ ವಾಹನದಟ್ಟಣೆ, ಪರಿಸರ ಮಾಲಿನ್ಯ, ಜೀವನ ಜಂಜಾಟಗಳಿಂದ ಬೇಸತ್ತಿದ್ದಾಗ, ಪ್ರಕೃತಿಯ ಮಡಿಲಿಗೆ ಪ್ರಯಾಣ ಬೆಳೆಸುವ ಯಾವ ಅವಕಾಶವನ್ನು ಕಳೆದುಕೊಳ್ಳಲಾಗುವುದಿಲ್ಲ.
ಹಾಗೆ, ನಾವೆಲ್ಲಾ ಸೇರಿ, ಈ ಭಾರಿ ಹೇಮಾವತಿ ನದಿಯ ಉಗಮ ಸ್ಥಳಕ್ಕೆ ಪ್ರಯಾಣ ಮಾಡಲು ನಿರ್ಧರಿಸಿದೆವು. ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲುಕಿನ 'ಜಾವಳಿ' ಎಂಬ ಸ್ಥಳ ನಮ್ಮ ನಾಡಿನ ಪ್ರಸಿದ್ದ ಹೇಮಾವತಿ ನದಿಯ ಉಗಮಸ್ಥಾನ. ಕೊಟ್ಟಿಗೆಹಾರ - ಕಳಸ ರಸ್ತೆಯ ೯ನೆ ಕಿ.ಮೀ.ಯಲ್ಲಿ ಬಲಕ್ಕೆ ತಿರುಗಿ ಒಂದೂವರೆ ಕಿ.ಮೀ ಕಾಡು ದಾರಿಯಲ್ಲಿ ಚಲಿಸಿದರೆ, ದಟ್ಟ ಕಾಡಿನ ನಡುವಿನ ಹೇಮಾವತಿ ಉಗಮಸ್ಥಾನವನ್ನು ತಲುಪಬಹುದು. ಕಾಡು ಹಾದಿಯಾದರೂ, ಸಣ್ಣ ವಾಹನಗಳಲ್ಲಿ ಗಮ್ಯ ಸ್ಥಾನ ತಲುಪಲು ಅಡ್ಡಿ ಇಲ್ಲ. ಸಕಲೇಶಪುರದಿಂದ ಕೊಟ್ಟಿಗೆಹಾರದವರೆಗಿನ ರಾಜ್ಯ ಹೆದ್ದಾರಿಯ ಸ್ಥಿತಿ ಮಾತ್ರ ಶೋಚನೀಯ.
ಬಿಂದುವಾಗಿ ಉಗಮಿಸುತ್ತಿರುವ ಹೇಮಾವತಿ
ಶಕ್ತಿ ಗಣಪತಿಯ ಗುಡಿ
ದೇವಳದ ಪರಿಸರ ಅತ್ಯಂತ ಶುಚಿಯಾಗಿದೆ. ದೇವಾಲಯದ ಮುಂದಿರುವ ದೊಡ್ಡ ಸಂಪಿಗೆ ಮರ ಪೂಜೆಗೆ ಹೂವನ್ನು ಒದಗಿಸುವುದರೊಂದಿಗೆ, ಸುತ್ತಮುತ್ತ ಪರಿಮಳವನ್ನೂ ಪಸರಿಸುತ್ತದೆ. ಹೇಮಾವತಿಯ ತೀರ್ಥ ಅತಿ ಮಧುರವಾಗಿದೆ.
ಪರಿಸರದ ಮಡಿಲಲ್ಲಿ ಅನಂದದಲ್ಲಿದ್ದಾಗ ಮತ್ತೆ ನಗರದ ಜಂಜಾಟಕ್ಕೆ ಮರಳುವ ನೆನಪಾಯಿತು. ಒಲ್ಲದ ಮನಸ್ಸಿನಿಂದ ಹಿಂದಿರುಗಿದೆವು.
S.Nanjundaswamy
Glad you are enjoying Nature at its best.You have tempted me to to do this trip now ! Giridhar
ReplyDeleteBahala Khushi Aaythu Uncle nimma blog odi. Chikmagalur is full of such amazing places. Keep writing.
ReplyDeleteExcellent Appa. You should write more. You have found yourself a good hobby!
ReplyDeleteShruthi